Delhi : ದೆಹಲಿಯಲ್ಲಿ ತಾಯಿ-ಮೂವರು ಮಕ್ಕಳ ಹತ್ಯೆ: ಶಂಕಿತ ಪತಿ ನಾಪತ್ತೆ, ಪೊಲೀಸ್ ಬಲೆ ಬೀಸಿತು
ದೆಹಲಿ : ಉತ್ತರ ದೆಹಲಿಯ ಸಮಯಪುರ ಬದ್ಲಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 30 ವರ್ಷದ ಮಹಿಳೆ ಮತ್ತು ಐದು, ನಾಲ್ಕು ಹಾಗೂ ಮೂರು ವರ್ಷ ವಯಸ್ಸಿನ ಅವರ ಮೂವರು ಪುತ್ರಿಯರ ಶವಗಳು ಪತ್ತೆಯಾಗಿವೆ. ಪ್ರಕರಣದ ಶಂಕಿತ ಆರೋಪಿಯಾಗಿರುವ ಪತಿ ತಲೆಮರೆಸಿಕೊಂಡಿದ್ದು ಅವರನ್ನು ಬಂಧಿಸಲು ಪೊಲೀಸ್ ತಂಡಗಳು ಬಿರುಸಿನ ಶೋಧ ನಡೆಸುತ್ತಿವೆ.
ಮೃತರನ್ನು ಅನಿತಾ ಮತ್ತು ಅವರ ಮೂವರು ಪುತ್ರಿಯರೆಂದು ಗುರುತಿಸಲಾಗಿದೆ. ಪಾಟ್ನಾ ಮೂಲದ ಈ ಕುಟುಂಬ ಚಂದನ್ ಪಾರ್ಕ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಶಂಕಿತ ಆರೋಪಿ ಮುಂಚುನ್ ಕೇವಾಟ್ ಅಝಾದ್ಪುರ ಮಂಡಿಯಲ್ಲಿ ಶುಂಠಿ ವ್ಯಾಪಾರಿಯಾಗಿದ್ದಾನೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ನಾಲ್ವರ ಮೃತದೇಹಗಳನ್ನು ಪತ್ತೆ ಮಾಡಿತು ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ತಿಳಿಸಿದ್ದಾರೆ. ಹತ್ಯೆಯ ಉದ್ದೇಶದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಪರಾಧ ತನಿಖಾ ತಂಡ (CIT) ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪುರಾವೆ ಸಂಗ್ರಹ ನಡೆಸಿದ್ದಾರೆ. ಬೆಳಿಗ್ಗೆಯಿಂದಲೇ ಶಂಕಿತ ಕೇವಾಟ್ ನಾಪತ್ತೆಯಾಗಿದ್ದು, ಅವರನ್ನು ಬಂಧಿಸಲು ಹಲವು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಲ್ಕು ನಿರಪರಾಧಿ ಜೀವಗಳ ಅಂತ್ಯ ದೆಹಲಿ ನಗರದಲ್ಲಿ ತೀವ್ರ ಆಕ್ರೋಶ ಮತ್ತು ಆತಂಕ ಮೂಡಿಸಿದೆ. ಪ್ರಕರಣ ತ್ವರಿತ ತನಿಖೆ ಮತ್ತು ಶಂಕಿತನ ಶೀಘ್ರ ಬಂಧನ ಆಗ್ರಹಿಸಿ ಸ್ಥಳೀಯರು ಒತ್ತಡ ತರುತ್ತಿದ್ದಾರೆ.
ಡ ನಾಲ್ವರ ಮೃತದೇಹಗಳನ್ನು ರಕ್ತದ ಮಡುವಿನಲ್ಲಿ ಪತ್ತೆ ಮಾಡಿದೆ” ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ಹೇಳಿದ್ದಾರೆ ಎಲ್ಲರ ಕತ್ತುಗಳನ್ನು ಹರಿತವಾದ ಆಯುಧಗಳಿಂದ ಸೀಳಲಾಗಿತ್ತು ಎಂದು ವಿವರಿಸಿದ್ದಾರೆ.
ಅಪರಾಧ ತನಿಖಾ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪುರಾವೆಗಳನ್ನು ಕಲೆಹಾಕಿದ್ದಾರೆ. ಬೆಳಿಗ್ಗೆಯಿಂದಲೇ ಕೇವಾಟ್ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.

