Thursday, April 2, 2026
Homeತಾಜಾ ಸುದ್ದಿSiddaramaiah: ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

Siddaramaiah: ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ

ಮುಂಬೈ, ನವೆಂಬರ್ 17– ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ “ನರೇಂದ್ರ ಮೋದಿ ಆರೋಪಗಳನ್ನು ಸಾಬೀತು ಮಾಡಿದರೆ, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ” ಎಂದು ಘೋಷಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳ ಯಶಸ್ಸುಗಳನ್ನು ಪ್ರಸ್ತಾಪಿಸಿದರು. “ಮೋದಿ ಅವರ ಭಾಷಣಗಳಲ್ಲಿ ಸುಳ್ಳುಗಳೇ ಭರಮೆ. ನಾವು ಜಾರಿಗೊಳಿಸಿದ ಯೋಜನೆಗಳು ರಾಜ್ಯದ ಜನರ ಮನೆ ಮನೆ ತಲುಪಿದ್ದು, ಇದನ್ನು ದೇಶವೇ ಗುರುತಿಸಿದೆ” ಎಂದು ಹೇಳಿದರು.

ಶಕ್ತಿ ಯೋಜನೆ: 3.25 ಕೋಟಿ ಉಚಿತ ಬಸ್ ಪ್ರಯಾಣಗಳು ಮಹಿಳೆಯರಿಗೆ.
ಗೃಹಜ್ಯೋತಿ: 1.62 ಕೋಟಿ ಕುಟುಂಬಗಳಿಗೆ 200 ಯೂನಿಟ್ ಉಚಿತ ವಿದ್ಯುತ್.
ಅನ್ನಭಾಗ್ಯ: 1.2 ಕೋಟಿ ಕುಟುಂಬಗಳಿಗೆ 5 ಕೆಜಿ ಉಚಿತ ಅಕ್ಕಿ ಹಾಗೂ ₹170 ಸಬ್ಸಿಡಿ.

ಸಿದ್ದರಾಮಯ್ಯ ಮೋದಿ ವಿರುದ್ಧ ಟೀಕಿಸುತ್ತಾ “ಅವರ ಆರೋಪಗಳು ಆಧಾರವಿಲ್ಲದವು. ಸತ್ಯ ಸಾಬೀತಾದರೆ, ರಾಜಕೀಯದಿಂದ ನಿವೃತ್ತಿಯಾಗಲು ಸಿದ್ಧ” ಎಂದು ಹೇಳಿದರು.

ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ?
ಈ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮೋದಿ ಈ ಸವಾಲಿಗೆ ಪ್ರತಿಕ್ರಿಯೆ ನೀಡುವ ಮುನ್ನ ಮತ್ತಷ್ಟು ಅಪ್ಡೇಟ್‌ಗಾಗಿ ತಾಜಾ ವಾಣಿ ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!