ದೆಹಲಿ : ದೆಹಲಿ ವಿಧಾನಸಭೆಯ ಗೇಟ್ ಸಂಖ್ಯೆ 2 ಅನ್ನು ತನ್ನ ಎಸ್ಯುವಿ (SUV) ಕಾರಿನಿಂದ ಡಿಕ್ಕಿ ಹೊಡೆದು ಒಳನುಗ್ಗಿದ್ದ ಆರೋಪಿ ಸರಬ್ಜೀತ್ ಸಿಂಗ್ (37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿಯಾದ ಈತ, 2020-21ರ ರೈತ ಚಳವಳಿಯ ಸಕ್ರಿಯ ಬೆಂಬಲಿಗನಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಚಳವಳಿಯ ಸಮಯದಲ್ಲಿ ಮೃತಪಟ್ಟ ರೈತ ನಾಯಕರ ಪರವಾಗಿ ಈತ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪೋಸ್ಟ್ಗಳನ್ನು ಹಂಚಿಕೊಂಡಿದ್ದನು.
ಸೋಮವಾರ ಮಧ್ಯಾಹ್ನ ಸುಮಾರು 2:10 ಕ್ಕೆ ಬಿಳಿ ಬಣ್ಣದ ಕಾರಿನಲ್ಲಿ ಅತಿವೇಗವಾಗಿ ಬಂದ ಸರಬ್ಜೀತ್, ಭದ್ರತಾ ಸಿಬ್ಬಂದಿಯ ಮೇಲೆ ಕಾರು ಹರಿಸುವ ಪ್ರಯತ್ನ ನಡೆಸಿ ವಿಧಾನಸಭೆಯ ಒಳಗೆ ನುಗ್ಗಿದ್ದನು. ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಕಾರಿನೊಳಗೆ ಹೂವಿನ ಗುಚ್ಛ ಮತ್ತು ಹಾರವನ್ನು ಇಟ್ಟು ಕೆಲಕಾಲ ಕುಳಿತಿದ್ದನು. ಈ ಕೃತ್ಯದ ಸಮಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿರಲಿಲ್ಲ. ಪೊಲೀಸರು ಈತನ ವಿರುದ್ಧ ಕೊಲೆ ಯತ್ನ (Attempt to Murder), ಅತಿಕ್ರಮ ಪ್ರವೇಶ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆ ಎಂದು ಆತನ ಕುಟುಂಬದವರು ಹೇಳುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : Tehran Synagogue Destroyed : ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಟೆಹ್ರಾನ್ನಲ್ಲಿರುವ ಸಿನಗಾಗ್ ‘ಸಂಪೂರ್ಣವಾಗಿ ನಾಶವಾಯಿತು’

