Friday, April 24, 2026
HomeLOCALMangaluru : ಚಮ್ಮಾರ ಗಲ್ಲಿಯಲ್ಲಿ ಬೃಹತ್ ಮರದ ಕೊಂಬೆ ಕುಸಿದು ಬಿದ್ದು, ಎರಡು ಮನೆಗಳು, ಮೂರು...

Mangaluru : ಚಮ್ಮಾರ ಗಲ್ಲಿಯಲ್ಲಿ ಬೃಹತ್ ಮರದ ಕೊಂಬೆ ಕುಸಿದು ಬಿದ್ದು, ಎರಡು ಮನೆಗಳು, ಮೂರು ವಾಹನಗಳಿಗೆ ಹಾನಿ

 ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾನೆ ಸುಮಾರು 3:30ರ ವೇಳೆಗೆ ಚಮ್ಮಾರ ಗಲ್ಲಿಯ ಬಸವನ ಗುಡಿಯ ಸಮೀಪವಿರುವ ಅಶ್ವತ್ಥ ಕಟ್ಟೆಯ ಬೃಹತ್ ಅಶ್ವತ್ಥ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಘಟನೆಯು ಆ ಪರಿಸರದ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.


ಮುರಿದು ಬಿದ್ದ ಮರದ ಬೃಹತ್ ಕೊಂಬೆಯು ಹತ್ತಿರದಲ್ಲಿದ್ದ ಎರಡು ಮನೆಗಳು ಹಾಗೂ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಎರಡು ಮನೆಗಳು ಭಾಗಶಃ ಜಖಂಗೊಂಡಿವೆ. ಅಲ್ಲದೆ, ಅದರ ಕೆಳಗಿದ್ದ ಮೂರು ದ್ವಿಚಕ್ರ ವಾಹನಗಳ ಪೈಕಿ ಎರಡು ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಘಟನೆಯ ಸಮಯದಲ್ಲಿ ನಿವಾಸಿಗಳೆಲ್ಲರೂ ಮನೆಯ ಒಳಗಿದ್ದ ಕಾರಣ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ.

ಮರದ ಕೊಂಬೆ ಬಿದ್ದ ರಭಸಕ್ಕೆ ಸ್ಥಳೀಯ ರಸ್ತೆಯು ಸಂಪೂರ್ಣವಾಗಿ ಬಂದ್ ಆಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ಆ ಪ್ರದೇಶವನ್ನು ಸುತ್ತುವರಿದು ಎಚ್ಚರಿಕೆ ವಹಿಸಿದ್ದಾರೆ. ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಮರದ ಕೊಂಬೆಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!